ಮನೆ ಕಾನೂನು ಆರೋಪಿ ಪಿನ್‌ ಲೊಕೇಷನ್‌ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆ ಹಕ್ಕಿಗೆ ಧಕ್ಕೆ ತರುತ್ತದೆ: ಸುಪ್ರೀಂ ಕೋರ್ಟ್

ಆರೋಪಿ ಪಿನ್‌ ಲೊಕೇಷನ್‌ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆ ಹಕ್ಕಿಗೆ ಧಕ್ಕೆ ತರುತ್ತದೆ: ಸುಪ್ರೀಂ ಕೋರ್ಟ್

0

ಆರೋಪಿ ಪಿನ್‌ ಲೊಕೇಷನ್‌ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

Join Our Whatsapp Group

ಗೂಗಲ್ ಪಿನ್ ಲೊಕೇಷನ್‌ ಹಂಚಿಕೊಳ್ಳಲು ಈ ಹಿಂದೆ ಎರಡು ಬಾರಿ ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಒಪ್ಪಿಕೊಂಡಿತಾದರೂ ಅದು ಜಾಮೀನು ಷರತ್ತಾಗಿರಲು ಸಾಧ್ಯವಿಲ್ಲ ಎಂದಿತು.

ಗೂಗಲ್‌ ಮ್ಯಾಪ್‌ ಅಪ್ಲಿಕೇಷನ್‌ನಲ್ಲಿರುವ ಪಿನ್‌ ಲೊಕೇಷನ್‌ ಹಂಚಿಕೊಂಡರೆ ಮಾತ್ರ ಜಾಮೀನು ನೀಡುವುದಾಗಿ ಉಚ್ಚ ನ್ಯಾಯಾಲಯವೊಂದು ವಿಧಿಸಿರುವ ಷರತ್ತು ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ ತನ್ನ ಪಿನ್‌ ಲೊಕೇಷನ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್ ಗೂಗಲ್ ಇಂಡಿಯಾಕ್ಕೆ ಈ ಹಿಂದೆ ನಿರ್ದೇಶನ ನೀಡಿತ್ತು.

ಪ್ರಕರಣದಲ್ಲಿ ಗೂಗಲ್ ಇಂಡಿಯಾವನ್ನು ಪಕ್ಷಕಾರನನ್ನಾಗಿ ಸೇರಿಸಿಕೊಳ್ಳುತ್ತಿಲ್ಲ ಬದಲಿಗೆ ಗೂಗಲ್‌ ಪಿನ್‌ ಕಾರ್ಯನಿರ್ವಹಣೆಯ ಬಗ್ಗೆ ಕಂಪನಿಯಿಂದ ಮಾಹಿತಿಯನ್ನಷ್ಟೇ ಕೋರಲಾಗುತ್ತಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ಇಂದು ಗೂಗಲ್ ವಾದವನ್ನು ಆಲಿಸಿದ ನ್ಯಾಯಾಲಯ ಜಾಮೀನು ಷರತ್ತಿನಂತೆ ಗೂಗಲ್ ಪಿನ್ ಸ್ಥಳದ ಅಂಶದ ಆದೇಶಗಳನ್ನು ಕಾಯ್ದಿರಿಸಿದೆ. ಉಳಿದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜುಲೈ 26 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದ ನೈಜೀರಿಯಾ ಪ್ರಜೆ ಫ್ರಾಂಕ್ ವಿಟಾಸ್‌ ಮತ್ತು ಸಹ ಆರೋಪಿಗೆ ಮಧ್ಯಂತರ ಜಾಮೀನು ನೀಡುವಾಗ ದೆಹಲಿ ಹೈಕೋರ್ಟ್ ವಿಧಿಸಿದ ಕೆಲವು ಷರತ್ತುಗಳಲ್ಲಿ ತಾನಿರುವ ಸ್ಥಳದ ಮಾಹಿತಿಯನ್ನು (ಗೂಗಲ್‌ ಪಿನ್‌ ಲೊಕೇಷನ್‌) ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕೆಂಬುದೂ ಸೇರಿತ್ತು.

ಆರೋಪಿಗಳು ಭಾರತ ತೊರೆಯದಂತೆ ಮತ್ತು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೈಜೀರಿಯಾ ಹೈಕಮಿಷನ್‌ನಿಂದ ಆಶ್ವಾಸನೆ ಪಡೆಯುವಂತೆ ದೆಹಲಿ ಹೈಕೋರ್ಟ್‌ ಆರೋಪಿಗಳಿಗೆ ಸೂಚಿಸಿತ್ತು. ಇದನ್ನು ಫ್ರಾಂಕ್ ವಿಟಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ವಾದ ಆಲಿಸಿದ ಸುಪ್ರೀಂ ಕೋರ್ಟ್‌ ಇಂತಹ ಕಠಿಣ ಜಾಮೀನು ಷರತ್ತು ವಿಧಿಸುವ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿತು.

ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ, ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಗೂಗಲ್ ಪಿನ್‌ಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಸ್ಥಳದ ವಿವರಗಳನ್ನು ನಿರಂತರವಾಗಿ ಪೊಲೀಸರಿಗೆ ಕಳುಹಿಸಬೇಕು ಎಂಬ ಜಾಮೀನು ಷರತ್ತಿಗೆ ನ್ಯಾಯಮೂರ್ತಿ ಓಕಾ ನೇತೃತ್ವದ ಮತ್ತೊಂದು ಪೀಠ ಜುಲೈನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಕಣ್ಗಾವಲಿಗೆ ಸಮನಾಗಬಹುದು ಎಂದು ನ್ಯಾಯಪೀಠ ಮೌಖಿಕವಾಗಿ ಟೀಕಿಸಿತ್ತು.

ಹಿಂದಿನ ಲೇಖನಮಾದಪ್ಪನ ಬೆಟ್ಟದಲ್ಲಿ ಹುಂಡಿ ಎಣಿಕೆ: 3 ಕೋಟಿ ರೂ. ಕಾಣಿಕೆ ಸಂಗ್ರಹ
ಮುಂದಿನ ಲೇಖನಕುಂದೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ