ಮನೆ ಪ್ರವಾಸ ದಕ್ಷಿಣ ಭಾರತದ ಅತ್ಯಂತ ಚಳಿಯ ಸ್ಥಳ ಯಾವುದು ಗೊತ್ತಾ?

ದಕ್ಷಿಣ ಭಾರತದ ಅತ್ಯಂತ ಚಳಿಯ ಸ್ಥಳ ಯಾವುದು ಗೊತ್ತಾ?

0

ಬೇಸಿಗೆಯಿಂದ ಪಾರಾಗಲು ಜನರು ಹೆಚ್ಚಾಗಿ ಪ್ರವಾಸ ಯೋಜಿಸುವುದು ಗಿರಿಧಾಮ ಅಥವಾ ಜಲಪಾತಗಳಿರುವ ಸ್ಥಳಗಳಿಗೆ. ಇನ್ನು, ಈ ತಾಣಗಳು ಬೇಸಿಗೆಯ ರಜೆಗಳಿಗೆ ಸೂಕ್ತವಾದುದು ಎಂದು ಪರಿಗಣಿಸಲಾಗಿದೆ. ನಮ್ಮ ದಕ್ಷಿಣ ಭಾರತದಲ್ಲಿ ಗಿರಿಧಾಮಗಳಿಗೇನೂ ಕೊರತೆ ಇಲ್ಲ. ಕೂರ್ಗ್, ಸಕಲೇಶಪುರ, ಚಿಕ್ಕಮಗಳೂರು, ವಯನಾಡ್, ಮುನ್ನಾರ್, ಕೊಡೈಕೆನಾಲ್, ಊಟಿ, ಕೂನೂರು ಸೇರಿದಂತೆ ಇನ್ನು ಸಾಕಷ್ಟು ಸುಂದರವಾದ ಗಿರಿಧಾಮಗಳಿವೆ.

ದಕ್ಷಿಣ ಭಾರತದ ಚಳಿಯ ಗಿರಿಧಾಮ

ದಕ್ಷಿಣ ಭಾರತದ ಅತ್ಯಂತ ಚಳಿಯ ಗಿರಿಧಾಮ ಮತ್ಯಾವುದು ಅಲ್ಲ, ತಮಿಳುನಾಡು ರಾಜ್ಯದ ಕೊಡೈಕೆನಾಲ್. ನೀವು ಬೇಸಿಗೆಯಿಂದ ಪಾರಾಗಲು ಕುಟುಂಬದ ಜೊತೆ ಕೊಡೈಕೆನಾಲ್’ಗೆ ಭೇಟಿ ನೀಡಬಹುದು. ಇದು ಲೇಕ್ಸೈಡ್ ರೆಸಾರ್ಟ್ ಪಟ್ಣಣಕ್ಕೂ ತುಂಬಾನೇ ಜನಪ್ರಿಯವಾಗಿದೆ.

ಮಧುಚಂದ್ರಕ್ಕೆ ಬೆಸ್ಟ್

ಬಹುತೇಕರು ಮಧುಚಂದ್ರಕ್ಕೆ ಉತ್ತರ ಭಾರತ ಅಥವಾ ವಿದೇಶ ಪ್ರವಾಸ ಯೋಜಿಸುತ್ತಾರೆ. ಆದರೆ ನವ ಜೋಡಿಗಳ ಮಧುಚಂದ್ರಕ್ಕೆ ಭಾರತದ ಅತ್ಯುತ್ತಮವಾದ ಗಿರಿಧಾಮಗಳಲ್ಲಿ ಒಂದಾಗಿರುವ ಕೊಡೈಕೆನಾಲ್ಗೆ ಭೇಟಿ ನೀಡಬಹುದು. ಪಳನಿ ಬೆಟ್ಟಗಳ ರೋಲಿಂಗ್ ಇಳಿಜಾರುಗಳ ನಡುವೆ ನೆಲೆಸಿರುವ ಈ ಗಿರಿಧಾಮವು ಸಮುದ್ರಮಟ್ಟದಿಂದ ಸುಮಾರು 7200 ಅಡಿ ಎತ್ತರದಲ್ಲಿದೆ.

ಕೊಡೈ ಸರೋವರ

ಕೊಡೈಕೆನಾಲ್ ಗಿರಿಧಾಮಕ್ಕೆ ಹೋದಾಗ ನೀವು ಸಾಕಷ್ಟು ಮೋಜಿನ ಚಟುವಟಿಕೆಗಳನ್ನು ಆನಂದಿಸಬಹುದು. ಬೈಕಿಂಗ್, ಟ್ರೆಕ್ಕಿಂಗ್ ನಲ್ಲಿ ತೊಡಗಿಸಿಕೊಳ್ಳಬಹುದು. ಜೊತೆಗೆ ಮಾನವ ನಿರ್ಮಿತ ಸರೋವರವಾಗಿರುವ ಕೊಡೈ ಸರೋವರದಲ್ಲಿ ದೋಣಿ ಸವಾರಿ ಚಿರಸ್ಮರಣೀಯ ಅನುಭವವನ್ನು ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಮುದ್ರಮಟ್ಟದಿಂದ ಸುಮಾರು 2285 ಮೀ ಎತ್ತರದಲ್ಲಿ ಈ ರಮಣೀಯವಾದ ಸರೋವರವಿದೆ.

ಈ ವಿಲಕ್ಷಣವಾದ ಸರೋವರವು ನಕ್ಷತ್ರಾಕಾರದಲ್ಲಿದೆ. ಸರೋವರವು ಹಚ್ಚ ಹಸಿರಿನ ಪಳನಿ ಬೆಟ್ಟಗಳ ಶ್ರೇಣಿಯಿಂದ ಅಲಂಕೃತಗೊಂಡಿದೆ.

ಯಾವೆಲ್ಲಾ ತಾಣಗಳು ಕೊಡೈಕೆನಾಲ್’ನಲ್ಲಿ ಫೇಮಸ್?

ಗ್ರೀನ್ ವ್ಯಾಲಿ ವ್ಯೂ, ಬೇರ್ ಶೋಲಾ ಫಾಲ್ಸ್, ಡಾಲ್ಫಿನ್ಸ್ ನೋಸ್, ಪಿಲ್ಲರ್ಸ್ ರಾಕ್ಸ್, ತಲೈಯರ್ ಫಾಲ್ಸ್, ವಟ್ಟಕನಲ್, ಮನ್ನವನೂರ್, ಕೋಕರ್ಸ್ ವಾಕ್, ಬೆರಿಜಾಮ್ ಸರೋವರ ಇನ್ನು ಅನೇಕ ತಾಣಗಳನ್ನು ಕೊಡೈಕೆನಾಲ್ನಲ್ಲಿ ನೀವು 2 ದಿನಗಳು ಇದ್ದು ನೋಡಬಹುದು.

ಕೊಡೈ ಸರೋವರದಲ್ಲಿ ದೋಣಿ ಸವಾರಿಯನ್ನು ಆನಂದಿಸಬಹುದು.

ಬೇರ್ ಶೂಲಾ ಜಲಪಾತದಲ್ಲಿ ನೀರಿನಲ್ಲಿ ಮಿಂದೇಳಬಹುದು.

ಜೊತೆಗೆ ಜಲಪಾತದ ಸುತ್ತಲೂ ರಮಣೀಯವಾದ ದೃಶ್ಯಾವಳಿಗಳನ್ನು ಆನಂದಿಸಬಹುದು.

ಗ್ರೀನ್ ವ್ಯಾಲಿಯಲ್ಲಿ ಫೋಟೋ ಕ್ಲಿಕ್ಲಿಸಿಕೊಳ್ಳಬಹುದು.

ಬೆರಿಜಮ್ ಸರೋವರದಲ್ಲಿ ಪ್ರಶಾಂತತೆಯನ್ನು ಆಸ್ವಾದಿಸಬಹುದು.

ಕೊಡೈಕೆನಾಲ್’ನ ಸುಂದರವಾದ ಬೆಟ್ಟಗಳ ಮೇಲೆ ಟ್ರೆಕ್ಕಿಂಗ್ ಕೈಗೊಳ್ಳಬಹುದು.

ಪಿಲ್ಲರ್ ರಾಕ್ಸ್’ನಲ್ಲಿ ಪಿಕ್ನಿಕ್ ಕೈಗೊಳ್ಳಬಹುದು.

ಭವ್ಯವಾದ ದೇವಾಲಯಕ್ಕೆ ಭೇಟಿ, ನಿರ್ಮಲವಾದ ವಾತಾವರಣವನ್ನು ಆಸ್ವಾದಿಸಲು ನಡಿಗೆಯಂತಹ ಅನೇಕ ರೋಮಾಂಚಕ ಚಟುವಟಿಕೆಗಳಿಂದ ಕೊಡೈಕೆನಾಲ್ ಪ್ರವಾಸವನ್ನು ಸಂರ್ಪೂಣಗೊಳಿಸಬಹುದು.

ಹಿಂದಿನ ಲೇಖನವಿಜಯೇಂದ್ರ ಹೆಬ್ಬುಲಿಯಾಗಿ ಬೆಳೆದಿದ್ದಾರೆ: ಶಾಸಕ ರಾಜುಗೌಡ
ಮುಂದಿನ ಲೇಖನಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್ ಬಯಸುತ್ತಿದೆ: ಅಮಿತ್ ಶಾ