ಮನೆ ರಾಜ್ಯ ಕೋಡಿಹಳ್ಳಿ ಚಂದ್ರಶೇಖರ್ ಪ್ರಕರಣದ ಸಮಗ್ರ ತನಿಖೆಗೆ ರೈತ ಸಂಘ ಒತ್ತಾಯ

ಕೋಡಿಹಳ್ಳಿ ಚಂದ್ರಶೇಖರ್ ಪ್ರಕರಣದ ಸಮಗ್ರ ತನಿಖೆಗೆ ರೈತ ಸಂಘ ಒತ್ತಾಯ

0

ಮೈಸೂರು(Mysuru): ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆ ಖಂಡನೀಯವಾಗಿದೆ. ಹೀಗಾಗಿ ಈ ಪ್ರಕರಣ ಮತ್ತು ರೈತರ ಹೆಸರಿನಲ್ಲಿ ಡೀಲ್ ಮಾಡಿದ ಆರೋಪ ಎದುರಿಸುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರಕರಣ ಕುರಿತಂತೆ ಸಮಗ್ರ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘ ರೈತ ಪರ್ವ ಆಗ್ರಹಿಸಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ  ಸಂಸ್ಥಾಪಕ ಅಧ್ಯಕ್ಷರಾದ ಟಿ.ವಿ. ಅರುಣ್‌ಕುಮಾರ್ ಮಾತನಾಡಿ, ಆರೋಪ ಮುಕ್ತರಾಗುವವರೆಗೂ ಕೋಡಿಹಳ್ಳಿ ಚಂದ್ರಶೇಖರ್ ಅವರು ಹಸಿರು ಟವೆಲ್ ಬಳಸಬಾರದು. ಇವರಿಂದಾಗಿ ಇನ್ನಿತರ ರೈತ ಹೋರಾಟಗಾರರನ್ನು ಸಹಾ ಜನರು ಅನುಮಾನದಿಂದ ನೋಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪದಾಧಿಕಾರಿಗಳಾದ ರವೀಂದ್ರ ಉತ್ತನಹಳ್ಳಿ, ಸುಶೀಲ, ಭರತ್ ಕಡಕೊಳ, ಹೊನ್ನಗಿರಿಗೌಡ, ಶಂಭುಲಿAಗೇಗೌಡ ಹಾಜರಿದ್ದರು.

ಹಿಂದಿನ ಲೇಖನನಿರ್ದೇಶಕ ಯೋಗರಾಜ್‌ ಭಟ್‌ ರವರ ಮಾವ ಸತ್ಯ ಉಮ್ಮತ್ತಾಲ್ ನಿಧನ
ಮುಂದಿನ ಲೇಖನನೀಟ್ ಮಾದರಿಯಲ್ಲೇ ಸಿಇಟಿ ಪರೀಕ್ಷೆಗೂ ಹಿಜಾಬ್ ನಿಷೇಧ