ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಶಿಕ್ಷಕ : ಎಲ್ಲದಕ್ಕಿಂತ ಹೆಚ್ಚು ಮತ್ತು (ನಿಶೆ) ಬರುವುದು ಯಾತರಲ್ಲೀ ?

ರಾಜು : ಪುಸ್ತಕದಲ್ಲಿ ಸರ್

ಶಿಕ್ಷಕ : ಅದು ಹೇಗೆ ಹೇಳ್ತೀಯಾ ?

ರಾಜು : ನಾನು ಪುಸ್ತಕ ತೆಗೆದು ಓದೋಕೆ ಕೂರೋದೆ ತಡ ಕಣ್ಣು ಮುಚ್ಚೋ ಹಾಗಾಗುತ್ತೆ.

****

ಟೀಚರು : ಯಾಕೋ ರಾಜು ಶಾಲೆಗೆ ತಡವಾಗಿ ಬಂದೆ ? ಅದು ಸರಿ ಚಪ್ಪಲಿ ಏಕೆ ಹಾಕೊಂಡು ಬಂದಿಲ್ಲ. ?

ರಾಜು : ನಮ್ಮಪ್ಪ ಅಮ್ಮ ಜಗಳ ಆಡ್ತಿದ್ರು ಟೀಚರ್, ಅದಕ್ಕೆ ಬರಿ ಕಾಲಲ್ಲಿ ಬಂದೆ.

ಟೀಚರ್ : ಅವರು ಜಗಳವಾಡೋಕು ನೀನು ಬರಿ ಕಾಲಲ್ಲಿ ಬರೋಕು ಏನು ಸಂಬಂಧ ?

ರಾಜು : ಏನ್ ಮಾಡ್ಲಿ ಟೀಚರ್ ನನ್ನ ಒಂದು ಚಪ್ಪಲಿ ಅಮ್ಮನ ಕೈಯಲ್ಲಿತ್ತು ಮತ್ತೊಂದು ಚಪ್ಪಲಿ ಅಪ್ಪನ ಕೈಯಲ್ಲಿತ್ತು.

***

ಕಿಟ್ಟು : ರಾಜು, ನಿನಗೆ ಯಾರಾದ್ರೂ ಹುಡುಗಿಯರು ಫೋನ್ ಮಾಡಿದ್ರೆ ಏನ್ ಅನ್ಸುತ್ತೆ ?

ರಾಜು : ಆಹಾ ಜೇನುತುಪ್ಪ ಸವಿದ ಹಾಗಾಗುತ್ತೆ.

ಕಿಟ್ಟು : ಹುಡುಗಿ ಅಪ್ಪ ಫೋನ್ ಮಾಡಿದ್ರೆ ?

ರಾಜು : ಜೇನು ಕಡಿದಂತಾಗುತ್ತದೆ.

ಕಿಟ್ಟು : ಕಲ್ಲನ್ನ ಕೆತ್ತಿದರೆ

ರಾಜು : ಶಿಲ್ಪವಾಗುತ್ತೆ

ಕಿಟ್ಟು : ಕಲ್ಲು ನಮ್ಮನ್ನು ಕೆತ್ತಿದರೆ ?

ರಾಜು : ಕೊಲೆಯಾಗುತ್ತೆ.

***

ಕಿಟ್ಟು : ಲೋ ರಾಜು, ನಂಗೆ ಬೆಂಗಳೂರಿನಲ್ಲಿ ಸೈಟು ಅಲರ್ಟ್ ಆಗಿದೆ.

ರಾಜು : ಹೌದೇ ! ಎಲ್ಲಿ ?

ಕಿಟ್ಟು : ಸ್ಮಶಾಣದಲ್ಲಿ.

ರಾಜು : ಅದೇನಿತ್ತಪ್ಪ ನಿಂಗೆ ಅಷ್ಟು ಅರ್ಜೆಂಟು ಸ್ಮಶಾನದಲ್ಲಿ ಸೈಟ್ ಅಲರ್ಟ್ ಮಾಡಿಸಿಕೊಳ್ಳೋಕೆ.

***

ಗೀತಾ : ಜ್ಯೋತಿಷಿಗಳೇ, ನನ್ನ ಅದೃಷ್ಟ ಹೇಗಿದೆ ?

ಜ್ಯೋತಿಷಿ : ನಿನ್ನ ಅದೃಷ್ಟ ತುಂಬಾ ಚೆನ್ನಾಗಿದೆ. ನಿನ್ನ ಅದೃಷ್ಟ ಹೇಗಿದೆ ಅಂದ್ರೆ. ನೀನು ಕಿಟ್ಟನ್ನ ಮದುವೆಯಾದರೆ ರಾಜು ಅದೃಷ್ಟವಂತನಾಗುತ್ತಾನೆ, ರಾಜುನ ಮದುವೆ ಆದರೆ ಕಿಟ್ಟು ಅದೃಷ್ಟವಂತನಾಗುತ್ತಾನೆ.

ಹಿಂದಿನ ಲೇಖನರಾಷ್ಟ್ರೀಯ ಭಾವೈಕ್ಯತೆ ಹಾಗೂ ಕನ್ನಡ ವೈಭವಕ್ಕೆ ಸಾಕ್ಷಿಯಾದ ಯುವ ಸಂಭ್ರಮ ಕಾರ್ಯಕ್ರಮ
ಮುಂದಿನ ಲೇಖನಹಿಂದಿನ ಸರ್ಕಾರ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ಈಗ ಮಳೆ ಇಲ್ಲದೆ ಉತ್ಪಾದನೆ ಕುಂಠಿತ ಆಗಿದೆ ಎನ್ನುವುದನ್ನು ನಮ್ಮ ರೈತರಿಗೆ ಮನವರಿಕೆ ಮಾಡಿ: ಸಿಎಂ ಖಡಕ್ ಸೂಚನೆ