ಮನೆ ಅಪರಾಧ ಮಳಿಗೆ ಹರಾಜು ಪ್ರಶ್ನಿಸಿದ್ದಕ್ಕೆ ವ್ಯಕ್ತಿ ಮೇಲೆ ಪಿಡಿಒ ಹಲ್ಲೆಗೆ ಯತ್ನ: ಆರೋಪ

ಮಳಿಗೆ ಹರಾಜು ಪ್ರಶ್ನಿಸಿದ್ದಕ್ಕೆ ವ್ಯಕ್ತಿ ಮೇಲೆ ಪಿಡಿಒ ಹಲ್ಲೆಗೆ ಯತ್ನ: ಆರೋಪ

0

ಮೈಸೂರು: ಮಳಿಗೆ ವಿಚಾರವಾಗಿ‌ ವ್ಯಕ್ತಿಯೊಬ್ಬ ಪಿಡಿಓವನ್ನು ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯ ಮೇಲೆ ಪಿಡಿಓ ಹಲ್ಲೆಗೆ ಮುಂದಾಗಿರುವ ಘಟನೆ ತಿ.ನರಸೀಪುರ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್ ವಿರುದ್ಧ ಗೂಂಡಾ ವರ್ತನೆ ಆರೋಪ ಕೇಳಿ ಬಂದಿದೆ.

ಸಾರ್ವಜನಿಕರ ಮೇಲೆ ಏಕವಚನದಲ್ಲೇ ಪದ ಬಳಕೆ ಮಾಡಿರುವ ತಿಲಕ್‌ ರಾಜ್‌ ಹಲ್ಲೆಗೆ ಮುಂದಾಗಿದ್ದಾನೆ. ಗ್ರಾಮ ಪಂಚಾಯಿತಿಗೆ ಸೇರಿದ ಮಳಿಗೆಗಳನ್ನ ಹರಾಜು ನಡೆಸದೆ ಏಕಾಏಕಿ ಉಳ್ಳವರಿಗೆ ಪಿಡಿಒ ತಿಲಕ್‌ ರಾಜ್‌ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಮಳಿಗೆ ವಿಚಾರವಾಗಿ‌ ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.ಕರ್ತವ್ಯ ನಿರ್ವಹಿಸಿರುವ ಎಲ್ಲಾ ಪಂಚಾಯಿತಿಗಳಲ್ಲೂ ಇದೆ ರೀತಿ ಗೂಂಡಾ ವರ್ತನೆ ತೋರಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಈತನ ವರ್ತನೆಗೆ ಗ್ರಾಮಸ್ಥರು ತೀವ್ರ ಕಿಡಿಕಾರಿದ್ದಾರೆ.

ಹಿಂದಿನ ಲೇಖನಕರೆಯದೇ ಊಟಕ್ಕೆ ಹೋಗುವವನು ನಾನಲ್ಲ: ಎಸ್.ಎ.ರಾಮದಾಸ್
ಮುಂದಿನ ಲೇಖನಶಿಕ್ಷಕರಿಗೆ ಗುರುತಿನ ಚೀಟಿ ವಿತರಣೆ ಕಾರ್ಯ ಶ್ಲಾಘನೀಯ: ಸಚಿವ ಕೆ.ಗೋಪಾಲಯ್ಯ