ಸಂಬಂಧ ಪರೀಕ್ಷೆ ಎಂಬುದು ಜಾತಿ ಸಿಂಧುತ್ವದ ಹಕ್ಕನ್ನು ನಿರ್ಧರಿಸುವ ನಿರ್ಣಾಯಕ ಪರೀಕ್ಷೆಯಲ್ಲ ಮತ್ತು ಜಾತಿ/ಪಂಗಡದ ಹಕ್ಕುಗಳ ಪರಿಶೀಲನಾ ಪ್ರಕ್ರಿಯೆಯ ಅತ್ಯಗತ್ಯ ಭಾಗವಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
[ಮಹಾ ಆದಿವಾಸಿ ಠಾಕೂರ್ ಜಮಾತ್ ಸ್ವರಕ್ಷಣ ಸಮಿತಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಸಂಬಂಧ ಪರೀಕ್ಷೆಯಲ್ಲಿ, ಅರ್ಹ ಅಧಿಕಾರಿಯಿಂದ ಜಾತಿ ಪ್ರಮಾಣ ಪತ್ರ ಪಡೆದ ಅಭ್ಯರ್ಥಿಗೆ ನಿರ್ದಿಷ್ಟ ಜಾತಿ/ಪಂಗಡದ ಬಗ್ಗೆ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಆತನ ಜಾತಿಯ ಮಾನಶಾಸ್ತ್ರೀಯ ಲಕ್ಷಣಗಳು, ದೇವತೆಗಳು, ಆಚರಣೆಗಳು, ಪದ್ಧತಿಗಳು, ಮದುವೆಯ ವಿಧಾನ, ಮರಣ ಸಮಾರಂಭಗಳು, ಮೃತ ದೇಹಗಳನ್ನು ವಿಲೇವಾರಿ ಮಾಡುವ ವಿಧಾನ ಇತ್ಯಾದಿಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ.
ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ವ್ಯಕ್ತಿಗೆ ಸಂಬಂಧ ಪರೀಕ್ಷೆಯಲ್ಲಿ ಬಳಸಲಾಗುವ ಪದ್ಧತಿ, ಆಚರಣೆಗಳ ಬಗ್ಗೆ ತಿಳಿದಿರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಭಯ್ ಎಸ್ ಓಕಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.
“ವಿಚಕ್ಷಣಾ ಕೋಶ, ಸಂಬಂಧ ಪರೀಕ್ಷೆಯನ್ನು ನಡೆಸುವಾಗ, ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಸಮುದಾಯ ದೇವತೆಗಳು, ಸಂಪ್ರದಾಯ, ಆಚರಣೆ, ಮದುವೆಯ ವಿಧಾನ, ಮರಣ ಸಮಾರಂಭಗಳು ಇತ್ಯಾದಿಗಳ ಬಗ್ಗೆ ಅರ್ಜಿದಾರರಿಗೆ ಇರುವ ತಿಳಿವಳಿಕೆಯನ್ನು ಪರೀಕ್ಷಿಸುತ್ತದೆ. ಪರೀಕ್ಷೆಯ ಸ್ವರೂಪವೇ ಹೇಳುವಂತೆ ಅಂತಹ ಸಂಬಂಧ ಪರೀಕ್ಷೆ ಎಂದಿಗೂ ನಿರ್ಣಾಯಕವಾಗುವುದಿಲ್ಲ. ಅರ್ಜಿದಾರರು ತಮ್ಮ ಕುಟುಂಬದೊಂದಿಗೆ ದೊಡ್ಡ ನಗರ ಪ್ರದೇಶಗಳಲ್ಲಿ ದಶಕಗಳಿಂದ ವಾಸಿಸುತ್ತಿದ್ದರೆ ಅಥವಾ ಅವರ ಕುಟುಂಬವು ಅಂತಹ ನಗರ ಪ್ರದೇಶಗಳಲ್ಲಿ ದಶಕಗಳಿಂದ ವಾಸ ಮಾಡುತ್ತಿದ್ದರೆ, ಅರ್ಜಿದಾರರಿಗೆ ಅಂತಹ ಸಂಗತಿಗಳ ಬಗ್ಗೆ ಜ್ಞಾನವಿಲ್ಲದಿರಬಹುದು. ವಿಚಕ್ಷಣಾ ಕೋಶ ಅರ್ಜಿದಾರರ ಪೋಷಕರನ್ನು ಕೂಡ ಪ್ರಶ್ನಿಸಬಹುದಾದರೂ ಒಂದು ನಿರ್ದಿಷ್ಟ ಪ್ರಕರಣದಲ್ಲಿ, ಹಲವಾರು ವರ್ಷಗಳಿಂದ ಅವರು ದೊಡ್ಡ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ಆ ಬಗ್ಗೆ ಪೋಷಕರಿಗೆ ಸಹ ತಿಳಿದಿರುವುದಿಲ್ಲ. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ನಿರ್ದಿಷ್ಟ ಬುಡಕಟ್ಟಿಗೆ ಸೇರದೆಯೂ, ಅವನಿಗೆ ಮೇಲೆ ಹೇಳಿದ ಅಂಶಗಳ ಬಗ್ಗೆ ಉತ್ತಮ ಜ್ಞಾನ ಇರುವ ಸಾಧ್ಯತೆಗಳಿವೆ ”ಎಂದು ನ್ಯಾಯಾಲಯ ಹೇಳಿದೆ.
ಆದ್ದರಿಂದ, ಜಾತಿ ಅಥವಾ ಪಂಗಡದ ಹಕ್ಕುಗಳ ಸಿಂಧುತ್ವವನ್ನು ನಿರ್ಧರಿಸಲು ಅಂತಹ ಪರೀಕ್ಷೆಯ ಫಲಿತಾಂಶವನ್ನು ದಾಖಲೆಯಲ್ಲಿರುವ ಇತರ ಎಲ್ಲಾ ಸಾಕ್ಷಿಗಳ ಜೊತೆಗೆ ಅಂಶೀಕರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
“ಸಂಬಂಧ ಪರೀಕ್ಷೆ ಎಂಬುದು ಜಾತಿಯನ್ನು ನಿರ್ಧರಿಸುವ ನಿರ್ಣಾಯಕ ಪರೀಕ್ಷೆಯಲ್ಲ. ಪ್ರತಿ ಪ್ರಕರಣದಲ್ಲಿ ಜಾತಿ ಅಥವಾ ಬುಡಕಟ್ಟು ಹಕ್ಕುಗಳ ಸೂಕ್ತ ನಿರ್ಣಯ ಮಾಡುವಾಗ ಇದು ಅತ್ಯಗತ್ಯ ಭಾಗ ಆಗುವುದಿಲ್ಲ” ಎಂದು ನ್ಯಾಯಾಲಯ ನುಡಿದಿದೆ.
ಸಂಬಂಧ ಪರೀಕ್ಷೆ ನಿರ್ಣಾಯಕವಾಗಿರಲು ಸಾಧ್ಯವಿಲ್ಲ ಮತ್ತು ಸಂಬಂಧ ಪರೀಕ್ಷೆ ನಡೆಸಿದಾಗ, ಜಾತಿ ಸಿಂಧುತ್ವವನ್ನು ನಿರ್ಧರಿಸಲು ಪರೀಕ್ಷೆಯ ಫಲಿತಾಂಶದ ಜೊತೆಗೆ ಉಳಿದೆಲ್ಲಾ ದಾಖಲೆಗಳ ಪರೀಕ್ಷಾ ಮೌಲ್ಯವನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಮಹಾರಾಷ್ಟ್ರ ಸರ್ಕಾರ ಕೆಲವು ನಿಯಮಾವಳಿಗಳ ಮೂಲಕ ಸಂಬಂಧ ಪರೀಕ್ಷೆಗಾಗಿ ವಿಚಕ್ಷಣಾ ಕೋಶ ರಚಿಸಿತ್ತು. ಪರಿಶಿಷ್ಟ ಜಾತಿ ನಿಯಮಾವಳಿಗಳಡಿ ಕೋಶ ರೂಪುಗೊಂಡಿದೆಯೋ ಅಥವಾ ಪರಿಶಿಷ್ಟ ಪಂಗಡಗಳ ನಿಯಮಾವಳಿಗಳಡಿ ರೂಪುಗೊಂಡಿದೆಯೋ ಎಂಬ ಗೊಂದಲಗಳಿದ್ದವು. ಇತ್ತ ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಸಂಬಂಧ ಪರೀಕ್ಷೆ ಅತ್ಯಗತ್ಯ ಅಂಶ ಎಂದು ಹೇಳಿತ್ತು ಮತ್ತೊಂದು ಪ್ರಕರಣದಲ್ಲಿ ಅಂತಹ ಪರೀಕ್ಷೆ ನಿರ್ಣಾಯಕ ಅಂಶವಲ್ಲ ಎಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು.
ಬಿರುಗಾಳಿಗೆ ಕುಸಿದು ಬಿದ್ದ ಮೊಬೈಲ್ ಟವರ್.
ನಿಜವಾಗಲೂ ಇತ್ತು ವಾಸುಕಿ ಸರ್ಪ….
ರಮ್ಯಾ ಔಟ್, ಐಶ್ವರ್ಯ ಎಂಟ್ರಿ…
ಕದ್ದ ಹಣವನ್ನು ಆಲದ ಮರದ ಕೆಳಗೆ ಬಚ್ಚಿಟ್ಟ ಬೂಪ
ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿರುವ ಮೀನುಗಾರಿಕಾ ಬೋಟ್..
EPF ವಿಚಾರದಲ್ಲಿ ಬದಲಾವಣೆ.
ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ ಗೆ ಪ್ರಶಸ್ತಿ ಸಿಕ್ಕಿದೆ
ಮೋದಿಯವರ ಬಗ್ಗೆ ಹಾಡು ಹಾಡಿದ್ದಕ್ಕೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ
ಮೋದಿಯವರ ಬಗ್ಗೆ ಹಾಡು ಹಾಡಿದ್ದಕ್ಕೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ…
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.