ಮನೆ ಅಪರಾಧ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

0

ಶ್ರೀರಂಗಪಟ್ಟಣ:ಅಪಾರ್ಟ ಮೆಂಟ್ ಮೇಲಿಂದ ಬಿದ್ದು ಬಿ.ಇ ಅಂತಿಮ ವರ್ಷದ ವಿದ್ಯಾರ್ಥಿ ಆತ್ಮ ಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ಹುಲಿಕೆರೆ ಗ್ರಾಮದ ಬಳಿಯ ಜುವಾರಿ ಅಡ್ವಟೆಜ್ ಅಪಾರ್ಟ್ ಮೆಂಟ್ ನಲ್ಲಿ ಸೋಮವಾರ ನಡೆದಿದೆ.

Join Our Whatsapp Group

ಪೇಪರ್ ಮಿಲ್ ಕಾಲೋನಿ ನಿವಾಸಿ ಮಹದೇವ ಎಂಬುವರ ಮಗ ಸುರೇಶ (೨೨) ಮೃತಪಟ್ಟ ಅಂತಿಮ ಬಿ.ಇ ವಿದ್ಯಾರ್ಥಿ ಎನ್ನಲಾಗಿದೆ.
ಕೆಆರ್‌ಎಸ್ ಮುಖ್ಯ ರಸ್ತೆ ಯಲ್ಲಿರುವ ಹುಲಿಕರೆ ಗ್ರಾಮಕ್ಕೆ ಸೇರಿದ ಜುವಾರಿ ಅಡ್ವಟೆಜ್ ಅರ್ಪಾಟ್ಮೆಂಟ್ ನ ೧೨ನೇ ಬುಹುಮಹಡಿ ವಸತಿ ಗಹದ ಮೇಲಿಂದ ಬಿದ್ದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಪೇಪರ್ ಮಿಲ್ ಕಾಲೋನಿ ನಿವಾಸಿ ಮಹದೇವ ಅವರ ಸಂಬಂಧಿಕರೊಬ್ಬರು ನಡೆಸುತ್ತಿದ್ದ ದಿನಸಿ ಅಂಗಡಿಯಲ್ಲಿ ಅಪಾರ್ಟ ಮೆಂಟ್‌ನ ಮನೆಗಳಿಗೆ ದಿನಸಿ ಡಿಲ್ವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಬುದ್ದಿವಂತ ವಿದ್ಯಾರ್ಥಿ ಚೆನ್ನಾಗಿ ಓದುತ್ತಿದ್ದ ಎಲ್ಲರು ಸಂತೋಷದಿಂದ ಇದ್ದವು ಎಂದು ತಂದೆ ಮಹದೇವ ದುಃಖಿಸುತ್ತಲೇ ತಿಳಿಸಿದರು.ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಸೀಲಿಸಿದ್ದಾರೆ. ಈ ಕುರಿತು ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಅಶ್ಲೀಲ ವಿಡಿಯೋ ಹರಿಬಿಟ್ಟ ರೂವಾರಿ ಸಿಎಂ ಮತ್ತು ಡಿಸಿಎಂ: ಬಿಜೆಪಿ ಮುಖಂಡ ದೇವರಾಜೇಗೌಡ ಗಂಭೀರ ಆರೋಪ
ಮುಂದಿನ ಲೇಖನಕಿವುಡ ಮಕ್ಕಳ ಸರ್ಕಾರಿ ಪಾಠಶಾಲಾ ಪ್ರವೇಶಕ್ಕೆ ಅರ್ಜಿ ಆಹ್ವಾನ