ಬೆಂಗಳೂರು: ಎಚ್’ಯುಎಫ್ ಪಿಪಿಎಫ್ ಉಳಿತಾಯ ಯೋಜನೆ ತಿದ್ದುಪಡಿಯಾಗಿದ್ದರೂ ಅದರ ಅಡಿಯಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಅದಕ್ಕೆ ಬಡ್ಡಿ ನೀಡದೇ ಹೋದ ಅಂಚೆ ಇಲಾಖೆಯ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸಂಬಂಧ ಬೆಂಗಳೂರಿನ ಕೆ.ಶಂಕರ್ ಲಾಲ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, ಯೋಜನೆ ಅವಧಿ ಮುಗಿದಿದೆ ಎಂಬುದು ತಿಳಿದಿದ್ದರೂ ಠೇವಣಿ ಪಡೆಯಲಾಗಿದೆ. ತದನಂತರ 12 ವರ್ಷಗಳ ಕಾಲ ಸುಮ್ಮನಿದ್ದು ನೋಟಿಸ್ ಕಳುಹಿಸಲಾಗಿದೆ. ಇದು ನ್ಯಾಯೋಚಿತ ಕ್ರಮವಲ್ಲ. ಆದ್ದರಿಂದ, ಅರ್ಜಿದಾರರಿಗೆ ಬಡ್ಡಿ ಸಹಿತ ಹಣ ವಾಪಸ್ ನೀಡಬೇಕು ಎಂದು ಆದೇಶಿಸಿದೆ.
ಒಂದು ವೇಳೆ ಅಕ್ರಮವಾಗಿ ಖಾತೆ ತೆರೆದಿದ್ದರೆ ಅಥವಾ ಖಾತೆ ದಾರರು ಅದಕ್ಕೇನಾದರೂ ಹಣ ಹೂಡಿಕೆ ಮಾಡಿದ್ದಾರೆ ಎಂಬುದು ಕಂಡುಬಂದಿದ್ದರೆ ತಕ್ಷಣವೇ ಅದನ್ನು ಸರಿಪಡಿಸಲು ಪೋಸ್ಟ್ ಮಾಸ್ಟರ್ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈ ರೀತಿ ಯಾವುದೇ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯತನ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?: ಎಚ್’ಯುಎಫ್ (ಹಿಂದೂ ಅವಿಭಕ್ತ ಕುಟುಂಬ) ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಉಳಿತಾಯ ಯೋಜನೆ 2005ರಲ್ಲಿ ಮುಕ್ತಾಯವಾಗಿತ್ತು. ಅರ್ಜಿದಾರರು 2009ರಲ್ಲಿ ಅದೇ ಎಚ್ಯುಎಫ್ ಪಿಪಿಎಫ್ ಯೋಜನೆ ಅಡಿಯಲ್ಲಿ ಹಣ ಠೇವಣಿ ಇರಿಸಿದ್ದರು. ಅದು ಮಾರ್ಚ್ 2025ಕ್ಕೆ ಮುಕ್ತಾಯವಾಗಿ ಹಣ ಬರಬೇಕಿತ್ತು. ಆದರೆ, 12 ವರ್ಷದ ನಂತರ 2021ರಲ್ಲಿ ಅಂಚೆ ಮಾಸ್ಟರ್, 2005ರಲ್ಲಿ ಯೋಜನೆ ಅವಧಿ ಮುಗಿದು ಹೋಗಿದೆ. ಆನಂತರ ನೀವು ಹಣ ಆ ಯೋಜನೆಯ ಹೆಸರಿನಲ್ಲಿ ಠೇವಣಿ ಮಾಡಿದ್ದೀರಿ, ಹಾಗಾಗಿ ನಿಮಗೆ ಬಡ್ಡಿ ನೀಡಲಾಗದು ಎಂದು ನೋಟಿಸ್ ನೀಡಿದ್ದರು.
ಅರ್ಜಿದಾರರು ಈ ನೋಟಿಸ್ ಅನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಠೇವಣಿ ಖಾತೆ ತೆರೆಯುವಾಗ ಯಾವುದೇ ಮಾಹಿತಿ ನೀಡದೆ ತದನಂತರ ನೋಟಿಸ್ ಕಳುಹಿಸಿರುವುದು ನಿಯಮ ಬಾಹಿರ. ಆದ್ದರಿಂದ, ಬಡ್ಡಿ ಸಹಿತ ಹಣ ಹಿಂತಿರುಗಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.
ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ ಗೆ ಪ್ರಶಸ್ತಿ ಸಿಕ್ಕಿದೆ
ಮೋದಿಯವರ ಬಗ್ಗೆ ಹಾಡು ಹಾಡಿದ್ದಕ್ಕೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ
ಮೋದಿಯವರ ಬಗ್ಗೆ ಹಾಡು ಹಾಡಿದ್ದಕ್ಕೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ…
ಬರುತ್ತಿದೆ ಅಯೋಧ್ಯ ರಾಮನ "ಬಯೋ ಪಿಕ್"…
ವಿಶ್ವ ದಾಖಲೆ ನಿರ್ಮಿಸಿದ ಭಾರತೀಯ ಬಾಲಕಿ…
ವಿಮಾನದಲ್ಲಿ ನಮಾಜ್
ಬಿಡುಗಡೆಯಾಗಿದೆ, ಜಗತ್ತಿನ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ
ನಟಿ ಹರ್ಷಿಕ ಪೂರ್ಣಚ್ಚ ಹಾಗೂ ನಟ ಭುವನ್ ಮೇಲೆ ಹಲ್ಲೆ.
ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾಗೆ ಎದುರಾಗಿದೆ ಸಂಕಷ್ಟ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.