ಮನೆ ರಾಜಕೀಯ ಸಿದ್ದರಾಮಯ್ಯ ಪ್ರಕರಣ ಮುಚ್ಚಿ ಹಾಕುವಾಗ ನಿಮ್ಮ ಪಕ್ಷದವರು ಬಿಲದಲ್ಲಿ ಗೆಣಸು ಕೆರೆಯುತ್ತಿದ್ರಾ? : ಕಾಂಗ್ರೆಸ್

ಸಿದ್ದರಾಮಯ್ಯ ಪ್ರಕರಣ ಮುಚ್ಚಿ ಹಾಕುವಾಗ ನಿಮ್ಮ ಪಕ್ಷದವರು ಬಿಲದಲ್ಲಿ ಗೆಣಸು ಕೆರೆಯುತ್ತಿದ್ರಾ? : ಕಾಂಗ್ರೆಸ್

0

ಬೆಂಗಳೂರು(Bengaluru): ಸಿದ್ದರಾಮಯ್ಯ ಅವರದ್ದು ಹಗರಣಗಳನ್ನು ಮುಚ್ಚಿ ಹಾಕುವಾಗ ನಿಮ್ಮ ಪಕ್ಷದವರು ಬಿಲದಲ್ಲಿ ಗೆಣಸು ಕೆರೆಯುತ್ತಿದ್ರಾ? ಅಥವಾ ಸದನದಲ್ಲಿ ಬ್ಲೂ ಫಿಲ್ಮ್‌ ನೋಡುತಿದ್ರಾ? ಎಂದು ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಸಿದ್ದರಾಮಯ್ಯ ಅವರದ್ದು ಹಗರಣಗಳನ್ನು ಮುಚ್ಚಿ ಹಾಕುವ ಸರ್ಕಾರವಾಗಿತ್ತು’ ಎಂಬ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕೆಯ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್. ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಅಕ್ರಮಗಳು, ಅವಾಂತರಗಳು ಬಯಲಾದಾಗ ಕಾಂಗ್ರೆಸ್‌ ಮೇಲೆ ಅಪಾದಿಸುವ ಖಯಾಲಿ ಬೆಳೆಸಿಕೊಂಡಿದ್ದೀರಿ. ಈಗ ಅನಗತ್ಯವಾಗಿ ನಮ್ಮ ವಿರುದ್ಧ ಆರೋಪಿಸುತ್ತಿದ್ದೀರಿ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಏನೇನೋ ಮಾತನಾಡುತ್ತಿದ್ದಾರೆ ಎಂದು ಕುಟುಕಿದ್ದರು. ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್‌ ಅವರು ಆರ್‌ಎಸ್‌ಎಸ್‌ನ ಶೋಷಣೆ ಸಿದ್ಧಾಂತದ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದೂ ಕಾಂಗ್ರೆಸ್‌ ಆರೋಪಿಸಿದೆ.

ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಹುತೇಕ ತಳ ಸಮುದಾಯದ ಮಕ್ಕಳನ್ನು ಶಿಕ್ಷಣ ವಂಚಿತರಾಗಿಸಲು ನಾಗಪುರದ ಕೇಂದ್ರ ಕಚೇರಿಯಿಂದ ಸುಪಾರಿ ಪಡೆದಿದ್ದಾರೆ. ಅವರ ಹುನ್ನಾರದಿಂದಲೇ ರಾಜ್ಯದ 10 ಲಕ್ಷ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ ಎಂದು ದೂರಿದೆ.

ಹಿಂದಿನ ಲೇಖನಮೈಸೂರಲ್ಲಿ ವಿಪತ್ತು ನಿರ್ವಹಣಾ ತಂಡಗಳ ಕೇಂದ್ರ ಸ್ಥಾಪನೆ: ಪ್ರತಾಪ್ ಸಿಂಹ
ಮುಂದಿನ ಲೇಖನಪಿಎಸ್’ಐ ಅಕ್ರಮ ನೇಮಕಾತಿ: ಸಿಗರೇಟ್, ವಿಸ್ಕಿಗೆ ಬೇಡಿಕೆ ಇಟ್ಟ ಬಂಧಿತ ಎಡಿಜಿಪಿ