ಮನೆ ಕೃಷಿ ವಿಶ್ವ ಭೂಮಿ ದಿನದ ಆಚರಣೆ

ವಿಶ್ವ ಭೂಮಿ ದಿನದ ಆಚರಣೆ

0

ಮೈಸೂರು(Mysuru): ಶ್ರೀ ರಾಜಗುರು ಜ್ಞಾನಜಾಗೃತಿ ಸಂಸ್ಥೆ(ರಿ) ವತಿಯಿಂದ ಮೈಸೂರು ನಗರ ಪಾಲಿಕೆ,ವಲಯ೧ ಇವರ ಸಹಯೋಗದೊಂದಿಗೆ ವಿಶ್ವ ಭೂಮಿ ದಿನಾಚರಣೆಯನ್ನು ಚಾಮುಂಡಿಪುರಂ ವ್ಯಾಪ್ತಿಯ ಶ್ರೀ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ ಆಚರಿಸಲಾಯಿತು.

ವಿಶ್ವ ಭೂಮಿ ದಿನದ ಈ ವರ್ಷದ ಘೋಷಣಾ ವಾಕ್ಯ ‘ನಮ್ಮ ಭೂಮಿಯಲ್ಲಿ ಹೂಡಿಕೆ ಮಾಡಿ’ಗೆ ತಕ್ಕಂತೆ ಕಾರ್ಯಕ್ರಮದಲ್ಲಿ ಉಚಿತವಾಗಿ ಗೊಬ್ಬರ ವಿತರಿಸಿ,ಸಸಿಗಳನ್ನು ನೆಡುವ ಮೂಲಕ ಯಶಸ್ವಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ವಲಯ೧ ರ ಪರಿಸರ ಇಂಜಿನಿಯರ್ ಆದ ಶಿಲ್ಪಶ್ರೀ, ಇಂಜಿನಿಯರ್ ಆದ ಕಿರಣ್,  ಶಿವಕುಮಾರ್, ಸಂಸ್ಥೆಯ ಅಧ್ಯಕ್ಷ ವಿಜಯಲಕ್ಷ್ಮಿ ಎನ್.ಜಿ,ಕಾರ್ಯದರ್ಶಿ ಭಾಗ್ಯಲಕ್ಷ್ಮಿ ಬಿ.ಎ,ಇತರ ಸದಸ್ಯರಾದ ಮಹೇಶ್ ಕುಮಾರ್ .ಎಸ್,ಮಂಜುನಾಥ್.ಎಂ.ಜಾಧವ್  ಉಪಸ್ಥಿತರಿದ್ದರು.

ಹಿಂದಿನ ಲೇಖನನೆರೆ ಮನೆಯವನನ್ನು ಕೊಂದು ಮೈಕ್ರೋವೇವ್​​ನಲ್ಲಿ ಬೇಯಿಸಿ ತಿಂದ ವ್ಯಕ್ತಿಯ ಬಂಧನ
ಮುಂದಿನ ಲೇಖನನಟ ಪುನೀತ್ ಭಾವಚಿತ್ರ ಪ್ರದರ್ಶನದ ಮೂಲಕ ಜನತಾ ಜಲಧಾರೆಗೆ ಚಾಲನೆ