ಮನೆ ಅಪರಾಧ ದೇವರ ಮೂರ್ತಿ ಮುಟ್ಟಿದ ದಲಿತ ಬಾಲಕನಿಗೆ 60 ಸಾವಿರ ದಂಡ

ದೇವರ ಮೂರ್ತಿ ಮುಟ್ಟಿದ ದಲಿತ ಬಾಲಕನಿಗೆ 60 ಸಾವಿರ ದಂಡ

0

ಕೋಲಾರ(Kolar) : ದೇವರ ಮೂರ್ತಿಯನ್ನು ಮುಟ್ಟಿದ ದಲಿತ ಬಾಲಕನಿಗೆ 60,000 ದಂಡವನ್ನು ವಿಧಿಸಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೆರಲ್ಲಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಹತ್ತು ದಿನಗಳ ಹಿಂದೆ ಭೂತಮ್ಮ ದೇವರ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ 15 ವರ್ಷದ ಬಾಲಕ ಚೇತನ್ ದೇವರ ಮೂರ್ತಿಯನ್ನು ಮುಟ್ಟಿದ್ದಾನೆ. ಇದಕ್ಕೆ ಆಕ್ರೋಶ ಗೊಂಡ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ಮತ್ತು ತಂಡದವರು ದೇವರ ಮೂರ್ತಿ ಮೈಲಿಗೆ ಆಗಿದೆ ಮತ್ತೊಮ್ಮೆ ಬಣ್ಣ ಬಳಿಯಬೇಕು ಹೀಗಾಗಿ ಯುವಕ ಮತ್ತು ಆತನ ಕುಟುಂಬಕ್ಕೆ 60,000 ದಂಡವನ್ನು ಕಟ್ಟುವಂತೆ ಧಮ್ಕಿ ಹಾಕಿದ್ದಾರೆ.

ದಂಡವನ್ನು ಕಟ್ಟಲು ಸಾಧ್ಯವಾಗದಿದ್ದರೆ  ಊರು ಬಿಟ್ಟು ಹೋಗುವಂತೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಇದರಿಂದ ನೊಂದ ಚೇತನ್ ಕುಟುಂಬದವರು ಮಾಸ್ತಿ ಪೊಲೀಸ್ ಠಾಣೆಯಲ್ಲಿ ನಾರಾಯಣಸ್ವಾಮಿ ವೆಂಕಟೇಶ್ ಸೇರಿದಂತೆ ಎಂಟು ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಹಿಂದಿನ ಲೇಖನಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನ
ಮುಂದಿನ ಲೇಖನಟೆಲಿಗ್ರಾಂನ ಹೊಸ ವೈಶಿಷ್ಯದ ಅನುಭವ ಪಡೆಯಲು ಆ್ಯಪ್ ಅಪ್ಡೇಟ್ ಮಾಡಿ