ಜಗವೆಲ್ಲಮಲಗಿರಲು ಅವನೊಬ್ಬನೆದ್ದ..
ಮಡದಿ ಮಗು ಮನೆ-ಮಾರು ರಾಜ್ಯ-ಗೀಜ್ಯ
ಹೊತ್ತಿರುವ ಉರಿಯಲಿ ಆಯಿತಾಜ್ಯ
ಹಿಂದೆ ಬಿದ್ದವು ಎಲ್ಲೋ ಕುದುರೆ ಕಾಲಾಳು
ಬಿಚ್ಚಿ ಉದುರಿತು ಎಲ್ಲೋ ಮನದ ಬಾಳು
ಹೊರಟ ಹೊರಟೇ ಹೊರಟ, ಹೊರಟನೆತ್ತೋ
ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ! – ವರಕವಿ ಬೇಂದ್ರೆಯವರು ಬುದ್ಧನ ಕತೆ ಹೇಳುತ್ತಿದ್ದರೆ ಅಂದು ರಾತ್ರಿ ಸೇವಕ ಚೆನ್ನನೊಡನೆ ಯಾರಿಗೂ ತಿಳಿಯದಂತೆ ಮನೆ ಬಿಟ್ಟ ‘ಗೌತಮ’ ಕಣ್ಣ ಮುಂದೆ ಬರುತ್ತಾನೆ. ಬೋಧಿವೃಕ್ಷದ ಕೆಳಗೆ ಅವನಿಗಾದ ಜ್ಞಾನೋದಯ ನೆನಪಾಗುತ್ತದೆ. ಬುದ್ಧ ಎಂದರೆ ನಿದ್ದೆಯಿಂದ ಎದ್ದು ನಡೆದವನು ಎಂದರ್ಥ. ಹಾಗಿದ್ದರೆ ನಿದ್ದೆಯಿಂದ ಎದ್ದವರೆಲ್ಲರೂ ಬುದ್ಧರಾಗುವರೇ? ಅರಳಿ ಮರದ ಬುಡದಲ್ಲಿಕುಳಿತರೆ ಎಲ್ಲರಿಗೂ ಜ್ಞಾನೋದಯವಾಗುವುದೇ ಎನ್ನುವ ಪ್ರಶ್ನೆ ಎದ್ದು ನಿಲ್ಲುತ್ತದೆ. ಜತೆಗೆ ಯಾರು ಬೇಕಾದರೂ ಬುದ್ಧರಾಗಬಹುದೇ ಎಂಬ ಕುತೂಹಲ.
ಆಗಬಹುದು ಬುದ್ಧ!
ಗೌತಮ ‘ಬುದ್ಧ’ನಾಗಿದ್ದು ಕೇವಲ ಸರ್ವ ಸಂಗ ಪರಿತ್ಯಾಗದಿಂದ ಅಲ್ಲ. ತಾನು ಕಂಡ ಬದುಕಿನ ಸತ್ಯ ದರ್ಶನದಿಂದ. ಯಾವ ಕಷ್ಟಗಳೂ ಅರಿಯದಂತೆ ಬೆಳೆದ ಗೌತಮನಿಗೆ ಅದೊಂದು ಬಾರಿ ಜಗತ್ತಿನ ಪರಿತಾಪಗಳು, ಸಂಕೋಲೆಗಳು ಕಣ್ಣೆದುರು ಬಂದಿದ್ದರಿಂದಲೇ ಅದರ ಮೂಲ ಅರಿಯಲು ಹೊರಟದ್ದು. ಅಂತಿಮವಾಗಿ ‘ಆಸೆಯೇ ದುಃಖಕ್ಕೆ ಮೂಲ’ ಎಂಬುದನ್ನು ಅರಿತದ್ದು. ಹಾಗಂತ, ಬುದ್ಧನಿಗೆ ಹೊರ ಜಗತ್ತಿನ ಸಮಸ್ಯೆಗಳ ಮೂಲ ತಿಳಿದದ್ದು ಹೊರಗಿನಿಂದಲ್ಲ, ಒಳಗಿನಿಂದಲೇ.
ಶಾಶ್ವತವಾದ ನೆಮ್ಮದಿ
ಬುದ್ಧನ ಹುಡುಕಾಟ ನಡೆದಿದ್ದು, ನೋವು, ಸಂಕಟಗಳಿಂದ ಮುಕ್ತವಾದ ಬದುಕಿಗಾಗಿ. ವಾಸ್ತವ ಮತ್ತು ನಮ್ಮ ಭ್ರಮೆಗಳ ನಡುವಿನ ಗೋಡೆಯನ್ನು ಒಡೆದಾಗಲೇ ನಿಜವಾದ ನೆಮ್ಮದಿ ಸಿಗುವುದು ಎಂದು ಅರ್ಥ ಮಾಡಿಕೊಂಡವನು ಬುದ್ಧ. ಸಂತೋಷ ಎನ್ನುವುದು ಹೊರಗೆಲ್ಲೋ ಇಲ್ಲ, ನಮ್ಮೊಳಗೇ ಇರುವ ಅದನ್ನು ಹೂವಿನಂತೆ ಎತ್ತಿ ತರಬೇಕು ಎಂದವನು ಬುದ್ಧ. ನಾವೆಲ್ಲರೂ ಬುದ್ಧನಂತೆಯೇ ಕಷ್ಟಗಳನ್ನು ಕಂಡವರು. ನೋವುಗಳನ್ನು ಉಂಡವರು. ನಮಗೂ ಬುದ್ಧನಂತೆಯೇ ತಪ್ಪುಗಳನ್ನು ಸರಿಪಡಿಸಿಕೊಳ್ಳುವ, ವಾಸ್ತವವನ್ನು ಅರ್ಥ ಮಾಡಿಕೊಳ್ಳುವ, ಸ್ವಸಾಮರ್ಥ್ಯವನ್ನು ಅರಿತುಕೊಳ್ಳುವ ನೂರು ಮಾರ್ಗಗಳಿವೆ. ಅಂದು ಬುದ್ಧನಿಗೆ ಸಿದ್ಧ ಸೂತ್ರಗಳೇನೂ ಇರಲಿಲ್ಲ. ಇಂದು ಬುದ್ಧ ಮಾರ್ಗವೇ ಎದುರಿಗಿದೆ. ಕೊಲೆ ಮಾಡಬೇಡ, ಅನ್ಯರ ಸೊತ್ತಿಗೆ ಆಸೆಪಡಬೇಡ, ಸುಳ್ಳನಾಡಬೇಡ, ಅತಿಯಾಸೆ-ಕಾಮಾತುರತೆ ಬೇಡ, ಮದ್ಯದ ಅಮಲು ಬೇಡ: ಇದು ಬುದ್ಧ ಬೋಧಿಸಿದ ಪಂಚಶೀಲಗಳು. ಒಳ್ಳೆಯ ದೃಷ್ಟಿ, ಒಳ್ಳೆಯ ಮಾತು, ಸತ್ ಸಂಕಲ್ಪ, ಸದ್ವರ್ತನೆ, ನ್ಯಾಯದ ಮಾರ್ಗ, ಸತತ ಪ್ರಯುತ್ನ, ನಿರಂತರ ಜಾಗೃತಿ, ಏಕಾಗ್ರತೆಗಳೆಂಬ ಅಷ್ಟಾಂಗ ಮಾರ್ಗವನ್ನೂ ಬುದ್ಧ ಹೇಳಿದ್ದಾನೆ.
ಜ್ಞಾನೋದಯದೆಡೆಗೆ
ಬುದ್ಧನ ಜ್ಞಾನೋದಯ ಜಗತ್ತಿನ ಒಳಿತಿನ ಚಿಂತನೆಯಲ್ಲಿಹುಟ್ಟಿದ್ದು. ಆದರೆ, ಪಾಮರರಾದ ನಮಗೆ ಕೇವಲ ನಮ್ಮ ಒಳಿತಿನ ಬಗೆ ತಿಳಿದರೂ ಸಾಕು. ಅದು ಮಹಾಜ್ಞಾನವಾಗುತ್ತದೆ. ನಮ್ಮ ಮನಸು ಅಪಾರ ಶಕ್ತಿಯ ಆಗರ. ಸಂಕಲ್ಪಿಸಿದ್ದನ್ನು ಸಾಧಿಸಬಲ್ಲತಾಕತ್ತನ್ನು ಹೊಂದಿರುವ ಸ್ಫೂರ್ತಿ ಸೆಲೆ. ಅದಕ್ಕೇ ಬುದ್ಧ ಹೇಳಿದ್ದು, ನೋವು ಎಲ್ಲರಿಗೂ ಇರುತ್ತದೆ, ಅದನ್ನು ಅನುಭವವಾಗಿಸಿಕೊಳ್ಳುವುದು, ಯಾತನೆಯಾಗಿಸಿಕೊಳ್ಳುವುದು ಅವರವರಿಗೆ ಬಿಟ್ಟದ್ದು ಅಂತ. ಇನ್ನೊಬ್ಬರಲ್ಲಿತಪ್ಪು ಹುಡುಕುವುದು ತುಂಬ ಸುಲಭ, ನಮ್ಮ ತಪ್ಪು ಸರಿ ಮಾಡಿಕೊಳ್ಳುವುದು ಕಷ್ಟ ಎನ್ನುವ ಬುದ್ಧನ ಮಾತಿನಲ್ಲಿಇನ್ನೊಬ್ಬರಲ್ಲೂನಮ್ಮನ್ನು ಕಾಣುವ ಗುಣವಿದೆ. ‘ನನ್ನನ್ನು ದ್ವೇಷಿಸುವವರನ್ನು ದ್ವೇಷಿಸಲು ನನಗೆ ಸಮಯವಿಲ್ಲ. ಯಾಕೆಂದರೆ, ಹಾಗೆ ಮಾಡುತ್ತಾ ಹೋದರೆ ನನ್ನನ್ನು ಪ್ರೀತಿಸುವವರನ್ನು ಪ್ರೀತಿಸಲು ನನಗೆ ಸಮಯವೇ ಸಿಗುವುದಿಲ್ಲ’ ಎನ್ನುತ್ತಾನೆ ಬುದ್ಧ. ಬುದ್ಧನಾಗಬೇಕೆಂದರೆ ಮನೆ ಬಿಡಬೇಕಿಲ್ಲ, ಅರಳಿ ಮರವೂ ಬೇಕಿಲ್ಲ. ನಮ್ಮನ್ನು ನಾವು, ಇನ್ನೊಬ್ಬರ ನೋವು ಅರ್ಥ ಮಾಡಿಕೊಂಡರಷ್ಟೇ ಸಾಕು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.