ಮನೆ ಅಪರಾಧ ಸ್ಕೂಟಿಗೆ ಸರ್ಕಾರಿ ಬಸ್ ಡಿಕ್ಕಿ:  ತಾಯಿ ಸಾವು, ಮಗಳಿಗೆ ಗಾಯ

ಸ್ಕೂಟಿಗೆ ಸರ್ಕಾರಿ ಬಸ್ ಡಿಕ್ಕಿ:  ತಾಯಿ ಸಾವು, ಮಗಳಿಗೆ ಗಾಯ

0

ಬೆಂಗಳೂರು(Bengaluru):  ಗುಂಡಿ ತಪ್ಪಿಸಲು ಹೋದ ವೇಳೆ ಸ್ಕೂಟಿಗೆ ಕೆಎಸ್’ಆರ್’ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ನಗರದ ಸುಜಾತ ಥಿಯೇಟರ್ ಬಳಿ ನಡೆದಿದೆ.

ತಾಯಿ ಉಮಾಗೆ ಗಂಭೀರ ಗಾಯಗಳಾಗಿತ್ತು. ಇಎಸ್’ಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.  ಮಗಳು ವನಿತಾಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಾಯಿ ಮಗಳು ಇಬ್ಬರು ಮೆಜೆಸ್ಟಿಕ್ ನಿಂದ ರಾಜಾಜಿನಗರದತ್ತ ಸ್ಕೂಟಿಯಲ್ಲಿ ತೆರಳುತ್ತಿದ್ದರು.  ಈ ವೇಳೆ ಗುಂಡಿ ತಪ್ಪಿಸಲು ಬೈಕ್ ಅನ್ನು ಸೈಡ್ ಗೆ ಚಲಾಯಿಸಿದ್ದು, ಈ ಸಮಯದಲ್ಲಿ ಕೆಎಸ್’ಆರ್ ಟಿಸಿ ಬಸ್ ಡಿಕ್ಕಿಯಾಗಿದೆ.  ಸರ್ಕಾರಿ ಬಸ್  ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು.  ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.