ಮನೆ ಹಾಸ್ಯ ಟೀಚರ್’ಗೆ ಗುಂಡನ ಪಂಚಿಂಗ್ ಡೈಲಾಗ್

ಟೀಚರ್’ಗೆ ಗುಂಡನ ಪಂಚಿಂಗ್ ಡೈಲಾಗ್

0

ಪ್ರಶ್ನೆ: ರಾಮನು ಮರದಿಂದ ಕೆಳಗೆ ಬಿದ್ದನು- ಇದು ಯಾವ ಕಾಲ?

ಗುಂಡ: ರಾಮನಿಗೆ ಕೆಟ್ಟಕಾಲ

***

ಪ್ರಶ್ನೆ: ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?

ಗುಂಡ: ಕುಳಿತುಕೊಂಡನು.

 ***

ಪ್ರಶ್ನೆ: ವಾಸ್ಕೋಡಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?

ಗುಂಡ: ಎರಡನೇ ಹೆಜ್ಜೆ ಇಟ್ಟನು.

***

ಪ್ರಶ್ನೆ; ಸತ್ಯ ಹರಿಶ್ಚಂದ್ರನ ಕತೆಯಿಂದ ತಿಳಿಯಬೇಕಾದ ನೀತಿ ಏನು?

ಗುಂಡ: ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು.

***

ಪ್ರಶ್ನೆ: ರಾಮಾಯಣದಿಂದ ತಿಳಿಯಬೇಕಾದ ನೀತಿ ಏನು?

 ಗುಂಡ: ಹೆಂಡತಿಗೆ ಮಾತು ಕೊಡಬಾರದು, ಕೊಟ್ಟರೂ ಅದನ್ನು ವರ್ಷಗಳ ಕಾಲ ಕಾದಿಡಬಾರದು.

 ***

ಪ್ರಶ್ನೆ: ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು?

ಗುಂಡ: ಸ್ನಾನದ ಕೋಣೆಗೆ ಬಾಗಿಲು ಇದುವುದು ಅತೀ ಅವಶ್ಯ.

***