ಡಾಕ್ಟರ್ ನಾಗೇಶ್ ಕ್ಲಿನಿಕ್ ನಲ್ಲಿ ಬಹಳ ಮಂದಿ ರೋಗಿಗಳು ತಮ್ಮ ಸರದಿಗಾಗಿ ತುಂಬಾ ಹೊತ್ತಿನಿಂದ ಕಾದಿದ್ದರು. ಮುದುಕರೊಬ್ಬರು ಗೋಣಗುತ್ತ ಎದ್ದರು. “ಇನ್ನು ನಾನು ಕಾಯೊಲ್ಲ. ಮನೆಗೆ ಹೋಗಿ ಸಹಜವಾಗಿ ಸಾಯ್ತಿನಿ, ಇವರ ಔಷಧಿಯೇ ಬೇಡ!”
***
ಮೇಷ್ಟ್ರು : ಅಷ್ಟೋತ್ತರ ಎಂದರೇನು ಗೊತ್ತಾ?
ಮೂರ್ತಿ : ಪ್ರಶ್ನೆ ಎಷ್ಟಿರುತ್ತೋ ಅಷ್ಟೇ ಉತ್ತರಕೊಡುವುದು.
ಮೇಷ್ಟ್ರು : ಮರಣೋತ್ತರ ಅಂದ್ರೆ ಏನು?
ಮೂರ್ತಿ : ಪರೀಕ್ಷೆಯಲ್ಲಿ ಉತ್ತರ ಬರೆಯುತ್ತಾ ಪ್ರಾಣ ಬಿಡುವುದು.
***
ಹೆಂಡ್ತಿ : ಡಾಕ್ಟ್ರೇ ನಮ್ಮ ಯಜಮಾನರನ್ನ ಸ್ವಲ್ಪ ಸರಿಯಾಗಿ ಚೆಕಪ್ ಮಾಡಿ.
ಡಾಕ್ಟರು : ನಿಮ್ಮ ಯಜಮಾನರಿಗೆ ಏನಾಗಿದೆಯಮ್ಮ?
ಹೆಂಡ್ತಿ: ನಾನು ಇವರ ಮೇಲೆ ಜಗಳ ತೆಗೆದು ಜೋರಾಗಿ ಬಯ್ಯೋಕೆ ಶುರುಮಾಡಿದ್ರೆ ಸಾಕು, ಇವರಿಗೆ ಕಿವುಡು ಪ್ರಾರಂಭವಾಗಿ ಬಿಡುತ್ತೆ.
***
ತಾತ : ನಿನಗೆಷ್ಟು ವಯಸ್ಸು ಮಗು?
ಮಗು: ಗೊತ್ತಿಲ್ಲ ತಾತ! ನಾನು ಹುಟ್ಟಿದಾಗ ಅಮ್ಮನಿಗೆ 28 ಆಗಿತ್ತಂತೆ, ಈಗ ಅವಳು ವಯಸ್ಸನ್ನು ಕೇಳಿದರೆ 26 ಎನ್ನುತ್ತಾಳೆ.
***
ಫೈರ್ ಸ್ಟೇಷನ್ ನಿಗೆ ಫೋನ್ ಮಾಡಿದ ತಂದೆ, “ಸಾರ್ ನಿನ್ನೆಯಿಂದ ನನ್ನ ಮಗಳು ಕಾಣ್ತಾ ಇಲ್ಲ.” ಎಂದ.
“ಆದರೆ ಇದು ಪೊಲೀಸ್ ಸ್ಟೇಷನ್ ಅಲ್ಲ” ಎಂಬ ಉತ್ತರ ಆ ಕಡೆಯಿಂದ ಬಂತು.
“ಅದು ನನಗೂ ಗೊತ್ತು ಸಾರ್. ನಿಮ್ಮ ಫೈರ್ ಸ್ಟೇಷನ್ ನಲ್ಲಿ ಕೆಲಸ ಮಾಡೋ ಬಾಲು, ನಮ್ಮ ಮನೆಗೆ ಆಗಾಗ ಬರ್ತಾ ಇದ್ದ.”
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.