ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಕಿಟ್ಟು : ನಿಂಗು ನಿನ್ನ ಹೆಂಡ್ತಿಗೂ ಜಗಳವಾದರೆ ಏನು ಮಾಡ್ತೀಯಾ ?

ರಾಜ : ನಾವು ಒಂದು ತೀರ್ಮಾನ ಮಾಡಿಕೊಂಡ್ಡಿದ್ದೀವಿ. ನಿನಗೆ ಸಿಟ್ಟು ಬಂದರೆ ಅವಳು ಅಡುಗೆ ಮನೆಗೆ ಹೋಗಬೇಕು. ನನಗೆ ಸಿಟ್ಟು ಬಂದರೆ ನಾನು ಪೇಟೆ ಕಡೆ ಹೋಗಬೇಕು.

ಕಿಟ್ಟು : ಇದು ತೀರ್ಮಾನವಾದ ಮೇಲೆ ಜಗಳ ಆಡಲೇ ಇಲ್ಲಾ ಅನ್ನು.

ರಾಜ : ಜಗಳ ಹೇಗಾಗುತ್ತೆ. ನಾನು ಮನೆ ಸೇರೋದೆ ಇಲ್ವಲ್ಲಾ.

***

ಮಗ ಬೂಟು ಕೊಡಿಸೆಂದು ಅಪ್ಪನಿಗೆ ದಿನಾ ದುಂಬಾಲು ಬಿದ್ದಿದ್ದ. ಒಂದು ದಿನ ಅಂಗಡಿಗೆ ಹೋದರು. ಅಪ್ಪ ಅಲ್ಲಿಯೂ ಚಪ್ಪಲಿ ತೊಗೋ ಎಂದ. ಮಗನಿಗೆ ಸಿಟ್ಟು ಬಂದು ಬೂತು ಕೊಡಿಸುತ್ತೀಯೋ ಚಪ್ಪಲಿ ತೆಗೆದುಕೊಳ್ಳಲೋ ಎಂದು ಜೋರಾಗಿ ಕೂಗಿದ. ಅಂಗಡಿಯಲ್ಲಿದ್ದವರೆಲ್ಲ ಇವರನ್ನೇ ನೋಡತೊಡಗಿದರು.

***

ತಂದೆ : ಮಗನೇ ನೀನು ಮುಂದೆ ಓದಿ ಏನಾಗಬೇಕು ಅಂತ ಇದ್ದೀಯ?

ಮಗ : ನಾನು ಪಶುವೈದ್ಯನಾಗಬೇಕು ಅಂತಿದ್ದೇನೆ.

ಅಪ್ಪ : ಯಾಕೋ ?

ಮಗ : ಪಶುಗಳು ಏನೇ ಹೆಚ್ಚು ಕಮ್ಮಿಯಾದರೂ ದೂರೋದಿಲ್ಲ. ಧರಣಿ, ಸತ್ಯಾಗ್ರಹ, ಮಾಡುವುದಿಲ್ಲ ಅದಕ್ಕೆ.

***

ನರ್ಸ್ : ನೋಡಿ, ಕಣ್ಣಿಗೆ ಔಷಧಿ ಹಾಕಿದೆ ಒಂದು ಗಂಟೆ ಕಣ್ಣು ಬಿಡಬಾರದು. ಕಣ್ಣು ಮುಚ್ಚಿ ಕುಳಿತುಕೊಳ್ಳಿ.

ರಾಜ : ಹಾಗೆ ಕಣ್ಮುಚ್ಚಿ ಕುಳಿತುಕೊಳ್ಳಲು ಆಗಲ್ಲ ಸಿಸ್ಟರ್

ನರ್ಸ್ : ಏಕಾಗೋಲ್ಲಾ ?

ರಾಜು : ನಾನು ಕಣ್ಮುಚ್ಚಿಕೊಂಡಿರುವುದು ನೋಡಿ ಯಾರಾದರೂ ನನ್ನ ಪರ್ಸ್ ಹೊಡ್ಕೊಂಡ್ ಹೋದ್ರೆ ?