ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗೀತಾ : ರೀ ಯಾಕ್ರೀ ಹೀಗೆ ಓಡಿ ಬರ್ತಾ ಇದ್ದೀರಿ ?

ರಾಜು : ಗೀತಾ ನಿನ್ನ ಮಾಂಗಲ್ಯ ಭಾಗ್ಯ ಚೆನ್ನಾಗಿತ್ತು.

ಗೀತಾ : ಏನಾಯ್ತು ?

ರಾಜು : ಗಾಡಿ ನನ್ನ ತಲೆ ಮೇಲೆ ಹೋಯ್ತು. ಆದರೂ ಬದುಕಿ ಬಂದೆ.

ಗೀತಾ : ಯಾವ ಗಾಡಿರೀ?

ರಾಜು : ಏರೋಪ್ಲೇನ್ ಕಣೇ, ನನ್ನ ತಲೆ ಮೇಲೆ ಹೊಯ್ತು.

***

ಕಿಟ್ಟು : ಏನು ರಾಜು ತುಟಿಯೆಲ್ಲಾ ಅಷ್ಟೊಂದು ಉತ್ಕೊಂಡಿದೆ ?

ರಾಜು : ಏನಿಲ್ಲ, ನನ್ನ ಹೆಂಡ್ತಿ ಹೂವಿನಲ್ಲಿ ಹೊಡೆದ್ಲು ಅದಕ್ಕೆ ಹಾಗಾಗಿದೆ.

ಕಿಟ್ಟು : ಹೂವಿನಲ್ಲಿ ಹೊಡೆದರೆ ಇಷ್ಟು ಗಾಯವಾಗುತ್ತಾ ?

ರಾಜು : ಅವಳು ಅರ್ಜೆಂಟ್ ನಲ್ಲಿದ್ದಳು. ಹೀಗಾಗಿ ಹೂವಿನ ಕುಂಡದ ಸಮೇತ ಹೊಡದ್ಲು.