ಮನೆ ಅಪರಾಧ ಪ್ರೇಮ ಪ್ರಕರಣ: ಯುವಕನ ಹತ್ಯೆ, ಮೂವರು ಆರೋಪಿಗಳ ಬಂಧನ

ಪ್ರೇಮ ಪ್ರಕರಣ: ಯುವಕನ ಹತ್ಯೆ, ಮೂವರು ಆರೋಪಿಗಳ ಬಂಧನ

0

ಹುಬ್ಬಳ್ಳಿ(Hubballi): ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಯುವಕನನ್ನು  ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು  ಮೂವರು ಆರೋಪಿಗಳನ್ನು  ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೃಷ್ಣ ರೆಡ್ಡಿ, ರಾಘು ಬನ್ಸ್ ಹಾಗೂ ಸುಮುಧರ ಪೂಜಾರಿ ಎಂದು ಗುರುತಿಸಲಾಗಿದೆ. ಮುಖ್ಯ ಆರೋಪಿ ರಾಘವೇಂದ್ರ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾನೆ. ರಾಘವೇಂದ್ರ ನೀಡಿದ ಮಾಹಿತಿ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ ?:

ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ಯಿಯಲ್ಲಿ ಮೇ 19 ರಂದು ಹಾಡಹಗಲೇ ನೇಕಾರ ನಗರದ ವಿನಯ್ ಎಂಬುವನನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಪ್ರೀತಿ ವಿಷಯಕ್ಕೆ ವಿನಯ್ ನನ್ನು ಟಾರ್ಗೆಟ್ ಮಾಡಿದ್ದ ಗುಂಪು, ನವನಗರ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು  ಬರ್ಬರವಾಗಿ ಕೊಲೆ ಮಾಡಿದ್ದರು.

ರಾಘವೇಂದ್ರ ಎಂಬಾತನ ಮೇಲೆ ಕೊಲೆ ಆಪಾದನೆ ಕೇಳಿ ಬಂದಿತ್ತು. ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸುತ್ತಿದ್ದಂತೆಯೇ ರಾಘವೇಂದ್ರ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದ. ಕೊಲೆ ಆರೋಪಿ ರಾಘುಗೆ ಮೂವರು ಸಹಕರಿಸಿದ್ದರು. ಘಟನೆ ನಡೆದ ಬಳಿಕ ಮೃತ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮೂವರು ಪ್ರಯತ್ನಿಸಿದ್ದರು.

ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.