ಮನೆ ರಾಷ್ಟ್ರೀಯ ಭಾರತ–ಚೀನಾ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ: ಲೆ.ಜನರಲ್ ಉಪೇಂದ್ರ ದ್ವಿವೇದಿ

ಭಾರತ–ಚೀನಾ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ: ಲೆ.ಜನರಲ್ ಉಪೇಂದ್ರ ದ್ವಿವೇದಿ

0

ನವದೆಹಲಿ (New Delhi)- ಭಾರತ–ಚೀನಾ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸೇನೆಯ ಉತ್ತರ ಕಮಾಂಡ್‌ನ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ (Lt General Upendra Dwivedi) ತಿಳಿಸಿದ್ದಾರೆ.

ಎಲ್‌ಎಸಿಯಾದ್ಯಂತ ಕಾರ್ಯಾಚರಣೆ ಸನ್ನದ್ಧತೆ ವಿಚಾರದಲ್ಲಿ ಯಾವುದೇ ರೀತಿಯ ಲೋಪವಾಗಿಲ್ಲ. ಈ ವಿಚಾರವಾಗಿ ನಾನು ನಿಮಗೆ ಖಾತರಿ ನೀಡಬಲ್ಲೆ ಎಂದು ಸೇನೆ ಆಯೋಜಿಸಿರುವ ‘ನಾರ್ತ್ ಟೆಕ್ ಸಿಂಪೋಸಿಯಂ 2022’ ಸಂದರ್ಭದಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. 2020ರ ಏಪ್ರಿಲ್‌ನಲ್ಲಿ ನಡೆದಂಥ ಘಟನೆ ಮರುಕಳಿಸದಂತೆ ಎಲ್ಲ ರೀತಿಯಲ್ಲಿಯೂ ಎಚ್ಚರ ವಹಿಸಲಾಗುತ್ತಿದೆ. ಎದುರಾಳಿಯು ಅಂಥ ದುಸ್ಸಾಹಸಕ್ಕೆ ಮತ್ತೆ ಕೈಹಾಕದಂತೆ ನೋಡಿಕೊಳ್ಳಲು ಬೇಕಾದ ರೀತಿಯಲ್ಲಿ ನಿಯೋಜನೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಹಿಂದಿನ ಲೇಖನಭದ್ರತಾ ಪಡೆಗಳಿಂದ ಮೂವರು ಉಗ್ರರ ಹತ್ಯೆ
ಮುಂದಿನ ಲೇಖನನಟ ಮೋಹನ್​ ಜುನೇಜ​ ನಿಧನ