ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಯಾವುದು?

ಶೀಲಾ : “ಸಾರಾಯಿ, ಮತ್ತು ನೀರು ಇದರಲ್ಲಿ ಯಾವುದು ಅಪಾಯಕಾರಿ”

ಗುಂಡ : “ನೀರು”

ಶೀಲಾ : “ಅದು ಹ್ಯಾಗೆ?”

ಗುಂಡ : “ಪ್ರವಾಹ ಬಂದರೆ ಸಾವಿರಾರು ಜನ ಸಾಯುತ್ತಾರೆ, ಆದರೆ ಈ ಸಾರಾಯಿಯಿಂದ ಎಲ್ಲಿ ಅಷ್ಟೊಂದು ಜನ ಸಾಯುತ್ತಾರೆ?”

Join Our Whatsapp Group

*****

ಒಂದು ಕೊಡಿ

ಪಾಪು : “ಶಟ್ರೆ ಬಟ್ಟೆ ಸೋಪು ಕೊಡಿ”

ಶೆಟ್ರು : “೫೦೧ ಕೊಡ್ಲಾ”

ಪಾಪು : “ಅಷ್ಟೆಲ್ಲಾ ಬೇಡ ಒಂದು ಸಾಕು”

*****

ದೊಡ್ಡದು

ತಿಮ್ಮ ಸ್ವಲ್ಪ ಪೆದ್ದ. ನಲವತ್ತಾದರು ಮದುವೆಯಾಗಿರಲಿಲ್ಲ. ಶ್ರೀಮಂತ ಕನ್ಯೆಯೊಬ್ಬಳನ್ನು ನೋಡಲು ಮನೆಯವರೆಲ್ಲಾ ಹೋಗಿದ್ದರು. ತಿಮ್ಮನ ತಾಯಿ ಮೊದಲೇ ಹೇಳಿದ್ರು, ಹೋದಾಗ ಹುಡುಗಿ ಮನೆಯವರೆದರು ದೊಡ್ಡ ದೊಡ್ಡ ಮಾತನಾಡೆಂದು. ಹುಡುಗಿಯ ಊರಿಗೆ ಬಸ್ಸಲ್ಲೇ ಹೋಗಿ ಅಲ್ಲಿಂದ ಕಾರುಮಾಡಿಸಿಕೊಂಡು ಹೋದರು. ಹುಡುಗಿ ಕಡೆಯವರು ಕಾರಿನಲ್ಲಿ ಬಂದಿರಾ ಎಂದಾಗ ತಮ್ಮ “ಇಲ್ಲ ಬಸ್ಸಿನಲ್ಲಿ ಬಂದೆ ಎಂದನು. ಯಾಕೆಂದ್ರೆ ಕಾರಿಗಿಂತ ಬಸ್ಸೇ ದೊಡ್ಡದಲ್ಲ.

ಹುಡುಗಿಯ ತಾಯಿ ಕೇಳಿದರು. “ನಿಮಗೆ ಲೋಟದಲ್ಲಿ ಕಾಫಿ ಕೊಡ್ಲಾ?”

ಆಗ ತಿಮ್ಮ ಹೇಳಿದ “ಬೇಡ ನಮಗೆ ಚೊಂಬಿನಲ್ಲಿ ಕೊಡಿ” ಯಾಕೆಂದರೆ ಲೋಟಕ್ಕಿಂತ ಚೊಂಬೆ ದೊಡ್ಡದಲ್ಲ.

ಸ್ವಲ್ಪ ಹೊತ್ತಿನ ನಂತರ ತಿಮ್ಮ ಸಣ್ಣದಾಗಿ ಕೆಮ್ಮಿದ. ಅಗ ಹುಡುಗಿಯ ತಂದೆಯು ಕೇಳಿದ, “ನಿಮಗೆ ಕೆಮ್ಮೆ?”

ಆಗ ತಿಮ್ಮ ಹೇಳಿದ “ಇಲ್ಲ ನನಗೆ ಟಿಬಿ ಕಾಯಿಲೆ ಇದೆ”, ಯಾಕೆಂದರೆ ಕೆಮ್ಮಿಗಿಂತ ಟಿಬಿ ದೊಡ್ಡ ಕಾಯಿಲೆಯಲ್ಲವೇ.

ಹಿಂದಿನ ಲೇಖನಚಾಮರಾಜ ವಿಧಾನ ಸಭಾ ಕ್ಷೇತ್ರದ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ
ಮುಂದಿನ ಲೇಖನಆಸೆ, ಆಮಿಷಗಳಿಗೆ ಮಾರುಹೋಗದಿರಿ: ಎಂ.ಕೃಷ್ಣರಾಜು