ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನಿಂಗ : ಮದುವೆಯಾದ ಮೇಲೆ ನಮ್ಮ ಸಂಸಾರದಲ್ಲಿ ಆದ ಮುಖ್ಯ ಬದಲಾವಣೆ ಏನು?

ರಾಜ : ತುಂಬಾ ಸಿಂಪಲ್ ನನ್ನ ಹೆಂಡತಿ ಅಡುಗೆ ಮಾಡುವುದು ಮರೆತುಬಿಟ್ಟಳು, ನಾನು ಅಡುಗೆ ಮಾಡೋದು ಕಲಿತೆ.

***

ಹುಚ್ಚರಿಬ್ಬರು ಮಾತನಾಡುತ್ತಿದ್ದರು.

ಮೊದಲನೇ ಹುಚ್ಚು : ಲೋ ನೋಡ್ತಾ ಇರು,  ಸದ್ಯದಲ್ಲೇ ನಾನು ಭಾರತದ ಪ್ರಧಾನಮಂತ್ರಿ ಆಗ್ತೀನಿ.

ಎರಡನೇ ಹುಚ್ಚ : ಅದು ಸಾಧ್ಯವಿಲ್ಲ.

ಮೊದಲನೇ ಹುಚ್ಚ : ಏಕೆ ಸಾಧ್ಯವಿಲ್ಲ?

ಎರಡನೇ ಹುಚ್ಚ : ನಾನು ಆ ಸ್ಥಾನಕ್ಕೆ ರಾಜೀನಾಮೆ ನೀಡಲು ತಯಾರಿಲ್ಲ.

***

ಪ್ರಯಾಣಿಕ : ವೇಳಾಪತ್ರಿಕೆಯ ಪ್ರಯೋಜನವೇನು ? ವೇಳೆಗೆ ಸರಿಯಾಗಿ ಬಸ್ಸು ಬರದಿದ್ದರೆ ?

ನಿಲ್ದಾಣ ಅಧಿಕಾರಿ : ವೇಳೆಗೆ ಸರಿಯಾಗಿ ಬಸ್ಸು ಹೊರಡಲಿಲ್ಲವೆನ್ನುವುದು ಹೇಗೆ ಗೊತ್ತಾಗುವುದು, ವೇಳಾಪತ್ರಿಕೆ ಇಲ್ಲದಿದ್ದರೆ ?

***

ಜಗ್ಗು : ಕರೆಂಟ್ ಹೋದ ನಂತರಾನೂ ಸ್ವಲ್ಪ ಹೊತ್ತು ಉರಿಯುತ್ತಿರುವಂತಹ ಒಂದು ಬಲ್ಬ್ ಕೊಡಿ.

ಅಂಗಡಿಯವ : ಅದು ಯಾವ ರೀತಿ ಬಲ್ಬ್ ?

ಜಗ್ಗು : ಕರೆಂಟ್ ಹೋದ್ರೂ ಫ್ಯಾನ್ ಸ್ವಲ್ಪಹೊತ್ತು ಸುತ್ತುತ್ತಲ್ಲ ಹಾಗೆ !

***

“ನನ್ನ ಮಗಳನ್ನು ಕಿಡ್ನಾಪ್ ಮಾಡಿದ್ದು ಅಲ್ದೆ, ನನಗೆ ಮದುವೆ ಇನ್ವಿಟೇಶನ್ ಕಳಿಸಿದ್ದಾನೆ. ಅಯೋಗ್ಯ” ರಾಮಣ್ಣ ರೇಗಾಡಿದ.

“ನೀನು ಏನ್ ಮಾಡ್ದೆ”

“ಬಿಡ್ತೀನಾ? ಹೋದೆ. ಹೋಗಿ ಊಟ ಮಾಡ್ಕೊಂಡು ಬಂದೆ.”

***

ಮಹಿಳೆ : ಹಲೋ…. ಇದು ಪೊಲೀಸ್ ಸ್ಟೇಷನ್ನ…. ಸರ್, ನನ್ನ ಗಂಡ ತರಕಾರಿ ತರ್ತೀನಿ ಅಂತ ಹೋದವರು ಇನ್ನೂ ಬಂದಿಲ್ಲ ನಾನೇನು ಮಾಡಲಿ ಸರ್ ?

ಇನ್ಸ್ಪೆಕ್ಟರ್ : ಇವತ್ತೊಂದಿನ ಬರೀ ತಿಳಿಸಾರು ಮಾಡ್ಕೊಂಡು ಊಟ ಮಾಡಮ್ಮ.

ಹಿಂದಿನ ಲೇಖನಚಿತ್ತ ವಿಕ್ಷೇಪ (ವಿಕ್ಷೋಭಗಳು ಮತ್ತು ಅಡಚಣೆಗಳು)
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ