ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಜಡ್ಜ್ : ನಿನ್ನ ಮೇಲೆ ಒಂದು ಆರೋಪ ಬಂದಿದೆ.

ರಾಜು : ನನ್ನ ಮೇಲೆ ಬಂದಿರೋ ಆರೋಪ ಯಾವುದು ಸ್ವಾಮಿ ?

ಜಡ್ಜ್ : ನೀನು ಎರಡು ಮದುವೆ ಆಗಿದ್ದೀಯಂತೆ.

ರಾಜು : ಖಂಡಿತ ಇಲ್ಲ ಸ್ವಾಮಿ.

ಜಡ್ಜ್ : ಅದಕ್ಕೆ ಸಾಕಷ್ಟು ಸಾಕ್ಷಾಧಾರ ಸಿಕ್ಕಿಲ್ಲ ಅಂತ ನಿನ್ನ ಬಿಡುಗಡೆ ಮಾಡಿದ್ದೇನೆ. ನೀನು ಮನೆಗೆ ಹೋಗಬಹುದು.

ರಾಜು : ನಾನೀಗ ಎಲ್ಲಿಗೆ ಹೋಗಲಿ ಸ್ವಾಮಿ, ಮೊದಲೇ ಹೆಂಡತಿ ಮನೆಗೋ, ಎರಡನೇ ಹೆಂಡತಿ ಮನೆಗೋ ?

****

ರಾಜು : ರಾತ್ರಿ ನಿನಗೆ ನಿದ್ರೆ ಬರದೇ ಇದ್ರೆ ಏನ್ ಮಾಡ್ತೀಯಾ ?

ಕುರಿ ಕಾಯುವವ : ನೀನು ನಮ್ಮ ಮಂದೆಯಲ್ಲಿರುವ ಕುರಿಗಳನ್ನೆಲ್ಲ ಒಮ್ಮೆ ಎಣಿಸುತ್ತೇನೆ. ಅಷ್ಟರಲ್ಲಿ ನಿದ್ದೆ ಬಂದುಬಿಡುತ್ತದೆ.

ರಾಜು : ಇದೂ ಒಳ್ಳೆ ಕೆಲಸ, ನಾನು ಇದೇ ಮಾಡ್ತೀನಿ

ಕುರಿಕಾಯುವವ : ಅರೆ! ಇದೇನೋ ನಿನ್ನ ಕಣ್ಣು ಕೆಂಪಾಗಿದೆ.

ರಾಜು : ರಾತ್ರಿ ನಿದ್ದೆ ಬರಲಿಲ್ಲ, ನೀನು ಹೇಳಿದ ಹಾಗೆ ಕುರಿ ಎಣಿಸೋಣ ಅಂತ ತೀರ್ಮಾನಿಸಿದೆ.

ಕುರಿ ಕಾಯುವ : ಸರಿ ಅದಕ್ಕೇನೀಗ ?

ರಾಜು : ಕುರಿ ಎಣಿಸೋಕೆ ಕುರಿಗಳೆಲ್ಲಿ ತರ್ಲಿ, ಅದಕ್ಕೆ ಕುರಿಗಳನ್ನೆಲ್ಲ ಹುಡುಕೊಂಡು ರಾತ್ರಿ ಇಡೀ ಊರೆಲ್ಲಾ ಅಲೆದೆ. 

****

ಮೇಡಂ : ರಾಜು, ನೀನೂ ಗಾಂಧೀಜಿಯಂತೆ ಆಗ್ತೀಯಾ ?

ರಾಜು : ಖಂಡಿತ ಆಗೋದಿಲ್ಲ ಮೇಡಂ.

ಮೇಡಂ : ಯಾಕೋ ಹಾಗಂತೀಯ ?

ರಾಜು : ಹಂತನ ಕೈಲಿ ಗುಂಡು ಹೊಡುಸ್ಕೊಂಡು ಸಾಯೋದು ನನಗೆ ಇಷ್ಟ ಇಲ್ಲಾ ಮೇಡಂ.

ಹಿಂದಿನ ಲೇಖನಉತ್ಥಿತ ತ್ರಿಕೋಣಾಸನ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ