ಮನೆ ರಾಜಕೀಯ ಪ್ರತಾಪ್ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಪ್ರತಾಪ್ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

0

ಮೈಸೂರು(Mysuru): ಸಮಾಜದಲ್ಲಿ ಅಶಾಂತಿ ಉಂಟುಮಾಡಲಿಕ್ಕೆ ಪ್ರತಾಪ್ ಸಿಂಹನಂಥವರು ಹುಟ್ಟಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಂಬಜ್ ಮಾದರಿಯಲ್ಲಿ ನಿರ್ಮಾಣವಾಗಿರುವ ಬಸ್ ತಂಗುದಾಣದ  ಕಟ್ಟಡಗಳನ್ನು ಒಡೆದು ಹಾಕುತ್ತೇನೆ ಎಂದಿರುವ ಸಂಸದ ಪ್ರತಾಪ್ ಸಿಂಹ  ಹೇಳಿಕೆಗೆ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಒಡೆದು ಹಾಕೋಕೆ ಇವನ್ಯಾರು..? ಇವನ ದುಡ್ಡಲ್ಲಿ ಕಟ್ಟಿಸಿದ್ನಾ? ಅದು ಸಾರ್ವಜನಿಕರ ದುಡ್ಡಲ್ಲಿ ಕಟ್ಟಿಸಿರೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

600 ವರ್ಷಗಳ ಕಾಲ ದೇಶವನ್ನು ಮೊಘಲರು ಆಳಿದ್ರಲ್ಲ ಅವಾಗ ಇವರೆಲ್ಲಾ ಎಲ್ಲೋಗಿದ್ರು? ಪ್ರತಾಪ್ ಸಿಂಹ ಎರಡು ಬಾರಿ ಸಂಸದನಾಗಿದ್ದಾನೆ. ಆತನಿಗೆ ಕಾಮನ್ ಸೆನ್ಸ್ ಇಲ್ವಾ..? ಇಂಥಾ ವಿಚಾರಗಳನ್ನು ಇಟ್ಟುಕೊಂಡು ಜನರ ಮನಸೆಳೆಯುವ ಪ್ರಯತ್ನ ಮಾಡ್ತಾರೆ. ಆದರೆ, ಜನ ಬುದ್ದಿವಂತರಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಬುದ್ದಿ ಕಲಿಸುತ್ತಾರೆ ಎಂದು ಏಕವಚನ ಪ್ರಯೋಗಿಸಿ ಹರಿಹಾಯ್ದರು.

ಹಿಂದಿನ ಲೇಖನರಾತ್ರೋರಾತ್ರಿ ಕಳಶ ಹೇಗೆ ಬಂತು ?: ಪ್ರತಾಪ್ ಸಿಂಹ ಪ್ರಶ್ನೆ
ಮುಂದಿನ ಲೇಖನಕೋಲಿ ಕಬ್ಬಲಿಗ ಸಮಾಜದ ಮುಖಂಡನ ಹತ್ಯೆ